ನಾಲ್ಕು ಪುಟ್ಟ ಪದ್ಯಗಳು

ನಡು ಹಗಲಲ್ಲಿ ಹಚ್ಚಿಟ್ಟ ದೀಪ-
ಬೆಳಕಿನಲ್ಲಿ ಕಳೆದುಹೋದ ಬೆಳಕು.
ಬೆಳಕಿನ ಸಿದ್ಧಾಂತ ಮುರಿದು ಬಿತ್ತು :
ದೊಡ್ಡ ಬೆಳಕು ಹಿಮ್ಮೆಟ್ಟಿದೆ
ಹಣ್ಣಿನಿಂದ ಮರ ಬಿದ್ದ ಹಾಗೆ.

ಗಂಟೆಯ ತುಂಬ ಗಾಳಿ,
ಬಾರಿಸದಿದ್ದರೂ.
ಹಕ್ಕಿಯ ಮೈಯ ತುಂಬ ಹಾರಾಟ,
ನಿಶ್ಚಲವಾಗಿದ್ದರೂ.
ಆಕಾಶದ ತುಂಬ ಮೋಡ,
ಒಂಟಿಯಾಗಿದ್ದರೂ,
ಶಬ್ದದ ತುಂಬ ಧ್ವನಿ,
ಯಾರೂ ಮಾತಾಡದಿದ್ದರೂ.
ಎಲ್ಲರ ಎಲ್ಲದರ ತುಂಬ ಓಟ,
ರಸ್ತೆಗಳಿಲ್ಲದಿದ್ದರೂ.
ಎಲ್ಲ ಧಾವಿಸುತ್ತಿವೆ
ಆಗುವುದಕ್ಕೆ.

ನನ್ನ ನೆರಳು ನನಗೆ ವಿಧೇಯತೆ ಕಲಿಸಿದೆ.
ರೈಲಿನ ಮುರುಕು ಸೀಟು
ಸ್ಮಶಾನದ ಗೋಡೆ
ನಗರದ ಕಳ್ಳ ಗಲ್ಲಿ ಎಲ್ಲೆಡೆ
ನನ್ನ ಬೆಂಬಿಡದೆ ಬಂದಿದೆ.
ಮೈ ಹೇಗೇ ಇದ್ದರೂ
ನರಳು ಹೆಜ್ಜೆ ಹೆಜ್ಜೆ ಅನುಕರಿಸಿದೆ.
ಮೂಲೆ ಮುಡುಕುಗಳಿಗೆ ನಡೆದಿದೆ.
ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದೆ.
ನನ್ನ ನೆರಳು ಇತರ ನೆರಳುಗಳನ್ನು
ಅಳವಡಿಸಿಕೊಳ್ಳಲು ಕಲಿಸಿದೆ.
ನನ್ನ ಮಟ್ಟ ನನಗೆ ತೋರಿಸಿದೆ.

ಪ್ರತಿ ಪದವೂ ಒಂದೊಂದು ಅನುಮಾನ
ಪ್ರತಿ ಮೌನವೂ ಒಂದೊಂದು ಸಂಶಯ.
ಆದರೂ ಇವುಗಳ ಹೆಣಿಗೆಯಲ್ಲಿ ಉಸಿರಾಡೋಣ.
ನಿದ್ದೆಯೆಂದರೆ ಮುಳುಗುವುದು.
ಎಚ್ಚರವೆಂದರೆ ಮತ್ತೆ ಮುಳುಗುವುದು.
ಆದರೂ ಇವುಗಳ ಹೆಣಿಗೆಯಲ್ಲಿ ಎಚ್ಚರಾಗೋಣ.
ಬದುಕೆಂದರೆ ಮಾಯವಾಗುವುದು
ಸಾವೆಂದರೆ ರೂಪಾಂತರವಾಗುವುದು
ಆದರೂ ಇವುಗಳ ಹೆಣಿಗೆಯಲ್ಲಿ
ಶೂನ್ಯದಲ್ಲೊಂದು ರುಜು ಹಾಕೋಣ.
*****
ಮೂಲ: ರಾಬರ್ಟೋ ಜು‌ಅರೋಝ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಭಾರತಿ ಇಳಿಯಲಿ
Next post ಮತ್ತೊಂದು ಮೇ ದಿನ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys